Loading...
ಕಿರು ಪರಿಚಯ

ಕವಿಪವಿ ನಡೆದು ಬಂದ ದಾರಿ

ರಾಜ್ಯದ ಪ್ರಮುಖ ಹಾಗೂ ಗುಣಮಟ್ಟದ ಮಾಧ್ಯಮ ಶಿಕ್ಷಣಕ್ಕೆ ಹೆಸರಾದ ವಿಶ್ವವಿದ್ಯಾಲಯಗಳಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕೂಡ ಒಂದು.1982 ರಲ್ಲಿ ಆರಂಭವಾದ ಈ ವಿಭಾಗವು ನಲವತ್ತು ಸಾರ್ಥಕ ಸಂವತ್ಸರಗಳನ್ನು ಪೂರೈಸಿದ್ದು, ನೂರಾರು ವಿದ್ಯಾರ್ಥಿಗಳು ಓದಿ, ನಾಡಿನಾದ್ಯಂತ ಮಾಧ್ಯಮ ಲೋಕದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಜನಪ್ರಿಯ ಮತ್ತು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸುವ ಸಾಮರ್ಥ್ಯ ಪಡೆದಿದ್ದಾರೆ.

1990ರಲ್ಲಿ ಕುಜಾಬ್ (Karnataka University Journalists Association, Bangalore,KUJAB)ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಈ ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿ ಮೊದಮೊದಲಿಗೆ ಕೇವಲ 20–25 ಜನ ಸದಸ್ಯರಾಗಿದ್ದರು. ಧಾರವಾಡದಂತಹ ವಿದ್ಯಾಕಾಶಿಯಿಂದ ಬೆಂಗಳೂರಿನಂತಹ ಸಿಲಿಕಾನ್‌ ಸಿಟಿಗೆ ಉದ್ಯೋಗ ಅರಸಿ ಬರುವ ವಿದ್ಯಾರ್ಥಿಗಳಿಗೆ ಅನಾಥ ಪ್ರಜ್ಞೆ ಕಾಡದಿರಲಿ ಎನ್ನುವ ಕಲ್ಪನೆಯೊಂದಿಗೆ ಸಮಾನ ಮನಸ್ಕರು ಸೇರಿ ಕಟ್ಟಿದ ಈ ಸಂಘ ಮುಂದೆ 1998ರಲ್ಲಿ ಕವಿಪವಿ (ಕನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕೂಟ) ಎಂದು ಮರುನಾಮಕರಣಗೊಂಡು ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡಿತು.

ಕನ್ನಡ ಪತ್ರಿಕೋದ್ಯಮ ವರ್ಷಾಚರಣೆ, ಮಾಧ್ಯಮ ಸಂವಾದ, ತರಬೇತಿ, ಮಾದರಿ ಪತ್ರಿಕಾಗೋಷ್ಠಿ,ಕಾರ್ಯಾಗಾರ, ಪಿಕ್ ನಿಕ್, ವ್ಯಯಕ್ತಿಕ ಸಮಸ್ಯೆಗಳಿಗೆ ಸ್ಪಂದನೆ, ಅಕಾಲಿಕ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಕೈಲಾದ ಆರ್ಥಿಕ ಸಹಾಯ,ವೃತ್ತಿಯಲ್ಲಿ ಸಾಧಕರಿಗೆ ಸನ್ಮಾನ ಹೀಗೆ ಆತ್ಮವಿಶ್ವಾಸ ಹಾಗೂ ಬದುಕಿಗೆ ಬಲ ತುಂಬುವ ಇಂತಹ ಸಾಕಷ್ಟು ಕೆಲಸಗಳು ಈ ಸಂಘದಿಂದ ನಡೆದುಕೊಂಡು ಬಂದಿವೆ. ಕಲಿಸಿದ ಗುರುಗಳಿಗೆ ಅಭಿನಂದನೆ, ವಿಚಾರ ಗೋಷ್ಠಿ, ತರಬೇತಿ,ಆರೋಗ್ಯ ತಪಾಸಣೆ, ಪ್ರವಾಸ, ಸಾಮೂಹಿಕ ಹಬ್ಬಗಳ ಆಚರಣೆ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಕಳೆದ ಮೂರು ದಶಕಗಳಲ್ಲಿ ಕವಿಪವಿ ಸಂಘವನ್ನು 6 ತಂಡಗಳು ಮುನ್ನಡೆಸಿಕೊಂಡು ಬಂದಿವೆ. ಅನೇಕ ಏರಿಳಿತಗಳ ನಡುವೆ ಬೆಂಗಳೂರು ಕವಿಪವಿ ಕೂಟಕ್ಕೆ ಈಗ ಸುಮಾರು 34 ವರ್ಷಗಳ ಹರೆಯ. ಇದೀಗ ಸಂಘ ಹೊಸ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡಿದ್ದು, ಹೊಸ ಕಾರ್ಯಕ್ರಮಗಳು, ಜವಾಬ್ದಾರಿಗಳಿಗೆ ವೇದಿಕೆಯಾಗಲು ಸಿದ್ಧವಾಗಿದೆ. ವಿಭಾಗದ 40ನೇ ವರ್ಷಾಚರಣೆ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಕವಿಪವಿ ಸಂಘದ ಜಾಲತಾಣ ಸಂಘದ ಮತ್ತೊಂದು ಮೈಲುಗಲ್ಲು ಎಂದೇ ಹೇಳಬಹುದು...

Office bearers

ಪದಾಧಿಕಾರಿಗಳು

Pravin
ಪ್ರವೀಣ ಶಿರಿಯಣ್ಣನವರ
ಅಧ್ಯಕ್ಷರು
ಲಿಂಗರಾಜ್ ಬಡಿಗೇರ್
ಉಪಾಧ್ಯಕ್ಷರು
ಸುಶೀಲಾ ಡೋಣೂರ
ಉಪಾಧ್ಯಕ್ಷರು
Sadashiv-Basur
ಸದಾಶಿವ ಬಾಸೂರು
ಪ್ರಧಾನ ಕಾರ್ಯದರ್ಶಿ
ರವಿ ಗೌಡ
ರವಿ ಗೌಡ
ಕಾರ್ಯದರ್ಶಿ
ob_Bhadrashetty
ಮಂಜುನಾಥ್ ಭದ್ರಶೆಟ್ಟಿ
ಉಪ ಕಾರ್ಯದರ್ಶಿ
Shankar Pagoji
ವಿನಾಯಕ್ ಲಿಮೆಯ
ಖಜಾಂಚಿ
ಮುತ್ತುರಾಜ್ ಸುಳ್ಳದ್
ಸಮಿತಿ ಸದಸ್ಯ
ಶಂಕರ್ ಪಾಗೋಜಿ
ಸಮಿತಿ ಸದಸ್ಯ
ಗಿರೀಶ್ ದೊಡ್ಡಮನಿ
ಸಮಿತಿ ಸದಸ್ಯ